ಸಿದ್ದು... ಸಿದ್ದರಾಮಯ್ಯ
ಮಠ ಸುತುತ್ತ ಇರುವ ಸಿ. ಎಂ
ಹೀಗೇ ಆದ್ರೆ ರಾಷ್ಟ್ರ ಕೆಡೋದು ಖಾಯಂ
ಜನರ ಸುತ್ತಾ ಸುತ್ತ ಬೇಕೋ ಸಿದ್ದು
ಏನು ಪ್ರಯೋಜನ ನೀನು ಗೆದ್ದು
ದೇವರನ್ನು ಬೇಡಿದ್ದು ಸಾಕು
ಜನರ ಸಮಸ್ಯೆಗಳಿಗೆ ಉತ್ತರವ ಹುಡುಕು
ಹಣ ದೇವರನ್ನು ಮರೆತು ಬಿಡು
ಋಣದೇವರನ್ನು(ಜನರು) ನೆನಪಲಿಡು
28 ಮಂದಿ ಸಚಿವರಾಗಿ ಪ್ರಮಾಣ
ಸ್ವಚ್ಛವಾಗಿರಲಿ ಇವರ ದೃಷ್ಟಿಕೋನ
ದಿನಸಿ ಸಾಮಾನು ಜನರಿಗೆ ಎಟುಕಿಸಿ
ಬಡವನಿಗೆ ರೈತನಿಗೆ ಜ್ಯೋತಿಯಾಗಲು ಶ್ರಮಿಸಿ
ಪರಿಶುದ್ಧ ರಾಜಕೀಯದಿಂದ ಪಾಲಿಸಿ....
-
ಕೆ. ಸಿ.
2 comments:
ಒಳ್ಳೆಯ ರಾಜಕೀಯ ವಿಡಂಬನೆ ಕಾವ್ಯ ಕಣ್ರೀ...
http://badari-poems.blogspot.in/
ಧನ್ಯವಾದಗಳು
Post a Comment